Languages

ಪಾಠ 2

ಯೇಸು ಯಾಕೆ ಕ್ರೂಜಿಸಲ್ಪಟ್ಟನು?

ಆತನು ಹಾಗೆ ಏಕೆ ಮಾಡಿದನು? ಏಕೆಂದರೆ ಆತನು ಹಾಗೆ ಮಾಡಬೇಕೆಂದು ತಾನೇ ನಿರ್ಧರಿಸಿದನು.

ಏಕೆ ಎಂದು ಅರ್ಥಮಾಡಿಕೊಳ್ಳುವ ಏಕೈಕ ಮಾರ್ಗವೆಂದರೆ ದೇವರ ಉತ್ತರವನ್ನು ಕೇಳುವುದು. ದೇವರು ನಮ್ಮನ್ನು ಪಾಪದಿಂದ ಮುಕ್ತಗೊಳಿಸಿ, ನಾವು ಮತ್ತೆ ಆತನನ್ನು ಸೇರುವಂತೆ ಮಾಡಿ ನಮ್ಮ ಪ್ರೀತಿ ಮತ್ತು ಸಮರ್ಪಣೆಯನ್ನು ಗೆಲ್ಲುವುದಕ್ಕಾಗಿ ನಮ್ಮ ಜೀವನವನ್ನು ಪ್ರತ್ಯಕ್ಷವಾಗಿ ಅನುಭವಿಸಲು ಮತ್ತು ನಂತರ ನಮಗಾಗಿ ಸಾಯಲು ಸ್ವಇಚ್ಛೆಯಿಂದ ಆಯ್ಕೆ ಮಾಡಿದ ಎಂದು ಹೇಳುತ್ತಾನೆ.

ಆತನು ಹಾಗೆ ಏಕೆ ಮಾಡಿದನು? ಏಕೆಂದರೆ ಆತನು ಹಾಗೆ ಮಾಡಬೇಕೆಂದು ತಾನೇ ನಿರ್ಧರಿಸಿದನು.

ಜೀವವು ರಕ್ತದಲ್ಲಿದೆ ಎಂದು ದೇವರು ಹೇಳುತ್ತಾನೆ. ಕ್ಷಮೆಯು ಶುದ್ಧ ರಕ್ತವನ್ನು ಚೆಲ್ಲಿದಾಗ ಮಾತ್ರ ಸಾಧ್ಯ, ಮತ್ತು ಶುದ್ಧ ರಕ್ತವು ಮಾತ್ರ ನಿತ್ಯ ಜೀವನವನ್ನು ನೀಡಲು ಸಾಧ್ಯ ಏಕೆಂದರೆ ಅದು ಸಾವಿನ ಶಾಪಕ್ಕೆ ಒಳಪಟ್ಟಿರುವುದಿಲ್ಲ. ಅದಕ್ಕಾಗಿಯೇ ಏಕೈಕ ನಿಜವಾದ ಶುದ್ಧ ಮನುಷ್ಯನಾದ ಯೇಸು ನಮಗಾಗಿ ಸಾಯಲು ಸ್ವಇಚ್ಛೆಯಿಂದ ಆರಿಸಿಕೊಂಡನು.

ದೇವರು ನಮಗಾಗಿ ಮರಣಹೊಂದುವನೆಂದು ಇತಿಹಾಸದುದ್ದಕ್ಕೂ ವಾಗ್ದಾನ ಮಾಡಿದ್ದಾನೆ. ಪ್ರವಾದಿಸಲ್ಪಟ್ಟದ್ದನ್ನು ಯೇಸು ಮಾಡಿ ತೋರಿದಾಗ, ದೇವರ ವಾಗ್ದಾನಗಳು ಸತ್ಯ ಮತ್ತು ನಂಬಲರ್ಹವೆಂದು ಆತನು ತೋರಿಸಿದನು. ಹೀಗೆ, ಯೇಸು ತಾನು ಹುಟ್ಟುವ ಮುಂಚೆಯೇ ಬರೆದ 300ಕ್ಕೂ ಹೆಚ್ಚು ಪ್ರವಾದನೆಗಳನ್ನು ನೆರವೇರಿಸಿದನು.

ಸಾವನ್ನು ಆರಿಸಿಕೊಳ್ಳುವ ಮೂಲಕ ಯೇಸು ಏನು ಸಾಧಿಸಿದನು ಎಂಬ ಪಟ್ಟಿಯನ್ನು ನೋಡೋಣ.

  1. ಆತನು ನಮ್ಮನ್ನು ದೇವರ ಸಾಮೀಪ್ಯಕ್ಕೆ ತರಲು ಮರಣಹೊಂದಿದನು.
  2. ಆತನ ಪವಿತ್ರಾತ್ಮವು ನಮಗೆ ಜೀವ ತಂದಿತು. ನಮ್ಮ ದುಷ್ಟತನದಿಂದ ನಾವು ಸಾಯುವಾಗ, ಆತನ ಪವಿತ್ರಾತ್ಮದಿಂದ ನಾವು ಜೀವಂತವಾಗುತ್ತೇವೆ.
  3. ಆತನು ನಮ್ಮ ಪಾಪಕ್ಕಾಗಿ ಏಟು ತಿಂದನು ಮತ್ತು ಆತನ ಶಿಕ್ಷೆಯು ನಮಗೆ ಶಾಂತಿ ಮತ್ತು ಗುಣಪಡಿಸುವಿಕೆಯನ್ನು ತರುತ್ತದೆ.
  4. ಆತನ ವಿಧೇಯತೆಯು ಭವಿಷ್ಯವಾಣಿಯನ್ನು ನಿಜವಾಗಿಸಿತು.
  5. ಆತನು ಕ್ರೂಜಿಸಲ್ಪಟ್ಟಾಗ ದೇವರ ಕಡೆಗಿರುವ ನಮ್ಮ ಋಣವನ್ನು ತೀರಿಸಿದನು, ದೇವರ ನ್ಯಾಯವನ್ನು ತೃಪ್ತಿಪಡಿಸಿದನು.
  6. ನಮ್ಮನ್ನು ಸ್ವಾಗತಿಸಲಿ ಎಂಬ ಕಾರಣಕ್ಕೆ ಆತನು ತಿರಸ್ಕರಿಸಲ್ಪಟ್ಟನು.
  7. ನಾವು ಆತನ ಜೀವವನ್ನು ಪಡೆಯಲಿ ಎಂದು ಆತನು ತನ್ನ ಪ್ರಾಣವನ್ನು ಸ್ವಯಂಪ್ರೇರಣೆಯಿಂದ ತ್ಯಜಿಸಿದನು. ಈ ರೀತಿಯಾಗಿ ಆತನು ಜೀವನದ ವಿನಿಮಯವನ್ನು ನೀಡುತ್ತಾನೆ-ನಮಗಾಗಿ ಅವನದ್ದು.
  8. ಆತನು ನಮ್ಮಿಂದ ಬಯಸುವ ಸೇವೆ ಮತ್ತು ನಿಸ್ವಾರ್ಥತೆಯ ಉದಾಹರಣೆಯಾದನು, ಜಗತ್ತನ್ನು ಶುದ್ಧೀಕರಿಸಿದನು.
  9. ನಾವು ದುಷ್ಟತನದಿಂದ ಗುಲಾಮಗಿರಿಯ ಶಾಪದಿಂದ ಮುಕ್ತರಾಗಲಿ ಎಂದು ಆ ಶಾಪವನ್ನು ತನ್ನ ಮೇಲೆ ಎಳೆದುಕೊಂಡು ಮರದಲ್ಲಿ ನೇತುಹಾಕಲ್ಪಟ್ಟನು.
  10. ಆದಾಮನು ಮಾಡಿದ ತಪ್ಪನ್ನು ಆತನು ಸರಿಪಡಿಸಿದನು. ಮೊದಲ ಮನುಷ್ಯನಾದ ಆದಾಮನು ಕೆಟ್ಟ ಆಸೆಗಳಿಲ್ಲದೆ ಜನಿಸಿದನು, ಆದರೆ ಅವನ ದುಷ್ಟ ಕೆಲಸಗಳು ಜಗತ್ತಿಗೆ ಸಾವನ್ನು ತಂದವು. ಯೇಸು ಸಹ ಕೆಟ್ಟ ಆಸೆಗಳಿಲ್ಲದೆ ಜನಿಸಿದರು, ಆದರೆ ಆತನ ಪಾಪರಹಿತ, ಸ್ವಯಂಪ್ರೇರಿತ ಮರಣವು ಜಗತ್ತಿಗೆ ಜೀವನವನ್ನು ತಂದಿತು.
  11. ಆತನೇ ಆದಿ, ಆತನೇ ಅಂತ್ಯ, ಹಾಗಾಗಿ ಪ್ರತಿ ಜೀವವೂ ಆತನ ಮೂಲಕ ಶೋಧಿಸಲ್ಪಡುತ್ತದೆ.
  12. ನಮಗೆ ಜೀವನದ ಸವಿಯನ್ನು ನೀಡಲು ಆತನು ಮರಣದ ರುಚಿ ಕಂಡನು. ಆತನಿಗೆ ಅಗತ್ಯವಿಲ್ಲದಿದ್ದರೂ, ಆತನು ಎಲ್ಲದರ ಮೇಲೆ ಅಧಿಕಾರ ಹೊಂದಿದ್ದಾನೆಂದು ತೋರಿಸಲು ಆತನು ಎಲ್ಲವನ್ನೂ ಅನುಭವಿಸಿದನು.
  13. ಆತ ತನ್ನನ್ನು ದ್ವೇಷಿಸುವ ಜನರಿಗಾಗಿ ತನ್ನ ಪ್ರಾಣವನ್ನು ಕೊಟ್ಟ ಶ್ರೇಷ್ಠ ಸೇವಕ. ಇತರ ಎಲ್ಲಾ ಕಾರ್ಯಗಳಿಗಿಂತ ಹೆಚ್ಚಾಗಯೀ ಆತನು ಇದರಲ್ಲಿ ತನ್ನ ಪ್ರೀತಿಯನ್ನು ಆಳವಾಗಿ ತೋರಿಸಿದನು.
  14. ಆತನ ಪರಿಪೂರ್ಣ ರಕ್ತವು ನಮ್ಮ ರೋಗಗಳನ್ನು ಗುಣಪಡಿಸುತ್ತದೆ ಮತ್ತು ನಮಗೆ ನಿತ್ಯ ಜೀವನವನ್ನು ನೀಡುತ್ತದೆ.

ಎಂತಹ ಗಮನಾರ್ಹ ಸಾಧನೆಗಳು ಮತ್ತು ಭರವಸೆಗಳ ಪಟ್ಟಿ! ನಮಗೆ ಇವುಗಳ ಅರ್ಥವೇನು?

ಯೇಸು ನಮಗಾಗಿ ಮರಣಹೊಂದಿದನು ಮತ್ತು ಎಲ್ಲವನ್ನೂ ಸಾಧಿಸಿದನು ಎಂದು ನಾವು ನಂಬಿದಾಗ, ಆತನು ಗಳಿಸಿದ ಪ್ರತಿಫಲವನ್ನು ನಾವು ಅನುಭವಿಸಬಹುದು ಎಂದು ದೇವರು ಹೇಳುತ್ತಾನೆ. ನಾವು ದುಷ್ಟತನದ ಶಾಪದಿಂದ ಮುಕ್ತರಾಗಲಿ ಎಂದು ಯೇಸು ನಮ್ಮ ಶಾಪವನ್ನು ತನ್ನ ಮೇಲೆಳೆದುಕೊಂಡ. ನಾವು ಆತನಲ್ಲಿ ನಮ್ಮ ಜೀವನ ಮತ್ತು ಸಂತೋಷವನ್ನು ಕಂಡುಕೊಂಡಾಗ, ದುಷ್ಟತನದಲ್ಲಿ ಪಾಲ್ಗೊಳ್ಳುವ ಬದಲು ಆತನನ್ನು ಪ್ರೀತಿಸಲು ಮತ್ತು ಪಾಲಿಸಲು ಆತನು ನಮಗೆ ಶಕ್ತಿಯನ್ನು ನೀಡುತ್ತಾನೆ ಎಂದು ಈ ವಾಗ್ದಾನವು ನಮಗೆ ಆತ್ಮವಿಶ್ವಾಸವನ್ನು ನೀಡುತ್ತದೆ.

ನಾವು ಹಿಂದೆ ತ್ಯಜಿಸಲು ಸಾಧ್ಯವಾಗದ ಕೆಟ್ಟ ಅಭ್ಯಾಸಗಳನ್ನು ನೋಡಿದಾಗ ನಾವು ಎದೆಗುಂದಬೇಕಿಲ್ಲ. ದೇವರು ನಮ್ಮನ್ನು ಪರಿಶುದ್ಧರನ್ನಾಗಿ ನೋಡಲಿ ಎಂಬ ಕಾರಣಕ್ಕೆ ಯೇಸು ನಮ್ಮ ಸಾಲವನ್ನು ತೀರಿಸಿದನು. ಈ ಭರವಸೆಯು ನಮ್ಮನ್ನು ಯಾವುದೂ ಆತನಿಂದ ದೂರವಿಡಲು ಸಾಧ್ಯವಿಲ್ಲ ಎಂಬ ವಿಶ್ವಾಸವನ್ನು ನೀಡುತ್ತದೆ.

ನಾವು ಮಾಡುವ ಕರ್ಮಗಳಿಂದಾಗಿ ದೇವರ ಕೃಪೆಯು ನಮ್ಮನ್ನು ರಕ್ಷಿಸುತ್ತಿಲ್ಲ, ಹಾಗಾಗಿ ನಾವು ನಮ್ಮ ಸ್ವಂತ ಸಾಮರ್ಥ್ಯಗಳಲ್ಲಿ ಹೆಮ್ಮೆ ಪಡಕೂಡದು. ಆದರೂ, ನಮ್ಮ ಜೀವನದಲ್ಲಿ ಆಗುವ ಬದಲಾವಣೆಯು ದೇವರ ಮೇಲಿನ ನಮ್ಮ ನಂಬಿಕೆ ಮತ್ತು ಆತನ ಮೇಲಿನ ನಮ್ಮ ಪ್ರೀತಿ ನಿಜ ಎಂಬುದನ್ನು ದೃಢಪಡಿಸುತ್ತದೆ. ಉದಾಹರಣೆಗೆ, ಒಬ್ಬ ಪುರುಷನು ತನ್ನ ಹೆಂಡತಿಯನ್ನು ಪ್ರೀತಿಸುತ್ತೇನೆ ಎಂದು ಹೇಳಿದರೆ, ಆದರೆ ಅವಳನ್ನು ಆದ್ಯತೆಯನ್ನಾಗಿಸದೆ, ಅವಳನ್ನು ಪ್ರೀತಿಯಿಂದ ನಡೆಸಿಕೊಳ್ಳದಿದ್ದರೆ, ಅವನು ಅವಳನ್ನು ನಿಜವಾಗಿಯೂ ಪ್ರೀತಿಸುವುದಿಲ್ಲ ಎಂದು ಸಾಬೀತುಪಡಿಸಿದಂತೆ. ಅವನು ಅವಳ ಬಗ್ಗೆ ಅಪಾರವಾದ ಪ್ರೀತಿಯನ್ನು ಹೊಂದಿದ್ದರೂ ಅವನ ನಡವಳಿಕೆ ಅವನ ಮಾತುಗಳನ್ನು ಅರ್ಥಹೀನಗೊಳಿಸುತ್ತದೆ.

ದೇವರು ಯಾರು ಎಂಬುದರ ಮೇಲೆ ಮತ್ತು ಆತನು ಮಾಡುವ ವಾಗ್ದಾನದ ಮೇಲಿನ ನಮ್ಮ ನಂಬಿಕೆಯು ಆತನು ನಮ್ಮಿಂದ ಅಪೇಕ್ಷಿಸುವ ಜೀವನವನ್ನು ನಡೆಸಲು ನಮಗೆ ಅಗತ್ಯವಾದ ಕಾರಣಗಳನ್ನು ಮತ್ತು ಶಕ್ತಿಯನ್ನು ನೀಡುತ್ತದೆ. ಇದು ಪವಿತ್ರಾತ್ಮದ ಮೂಲಕ ಸಂಭವಿಸುತ್ತದೆ ಮತ್ತು ನಾವು ಯೇಸುವಿಗೆ ಸೇರಿದ್ದೇವೆ ಮತ್ತು ಆತನ ತ್ಯಾಗದ ಕಾರಣದಿಂದ ನೀತಿವಂತರೆಂದು ಪರಿಗಣಿಸಲ್ಪಡುತ್ತೇವೆ ಎಂಬುದಕ್ಕೆ ಪವಿತ್ರಾತ್ಮವು ನಮ್ಮ ಭರವಸೆ (ಪುರಾವೆ) ಎಂದು ಬೈಬಲ್ ಹೇಳುತ್ತದೆ .

ಕ್ರೈಸ್ತರಾಗಿ ನಾವು ಯಾರು ಎಂದು ಸಾಬೀತುಪಡಿಸಲು ಶುದ್ಧ ಜೀವನವನ್ನು ನಡೆಸಲು ಯೇಸುವಿನ ಮೇಲಿನ ನಂಬಿಕೆಯು ನಮಗೆ ಬಲವನ್ನು ನೀಡುತ್ತದೆ. ಇದರರ್ಥ ನಾವು ಪರಿಪೂರ್ಣರಾಗುತ್ತೇವೆ ಎಂದಲ್ಲ, ಆದರೆ ನಾವು ಕ್ರೈಸ್ತರಾಗಿದ್ದರೆ, ದೇವರು ನಮ್ಮನ್ನು ಪರಿಪೂರ್ಣಗೊಳಿಸುತ್ತಾನೆ.

ಮತ್ತು ನಾವು ನಂಬಿಕಸ್ತರಾಗಿ ಉಳಿದರೆ, ಮುಂದಿನ ಜೀವನದಲ್ಲಿ ನಮ್ಮನ್ನು ಸಂಪೂರ್ಣವಾಗಿ ಪರಿಪೂರ್ಣಗೊಳಿಸುತ್ತಾನೆ.

ನಾವು ದ್ರಾಕ್ಷಿಬಳ್ಳಿಯ ಮೇಲಿನ ಕೊಂಬೆಗಳಂತೆ ಎಂದು ಯೇಸು ಹೇಳುತ್ತಾನೆ. ನಾವು ಆತನಿಗೆ ಸೇರಿದಾಗ, ಬಳ್ಳಿಯ ಮೇಲಿನ ಕೊಂಬೆಗಳಂತೆ ಆತನ ಜೀವನದಿಂದ ರಸವನ್ನು ಹೀರಲು ಪ್ರಾರಂಭಿಸುತ್ತೇವೆ. ಆತನ ಬೇರುಗಳು ನಮಗೆ ಆಹಾರವನ್ನು ನೀಡುತ್ತವೆ ಮತ್ತು ದೇವರು ನಮ್ಮನ್ನು ತರಿಯುವುದನ್ನು ಮುಂದುವರಿಸಿ ಬೆಳೆಯಲು ಸಹಾಯ ಮಾಡುವುದರಿಂದ ನಾವು ಉತ್ತಮ ಫಲವನ್ನು ನೀಡುತ್ತೇವೆ. ಆತನು ನಮ್ಮಲ್ಲಿ ಬೆಳೆಯುವಂತೆ ಫಲಗಳು ಪ್ರೀತಿ, ಸಂತೋಷ, ಶಾಂತಿ, ತಾಳ್ಮೆ, ದಯೆ, ಒಳ್ಳೆಯತನ, ಸೌಮ್ಯತೆ, ನಿಷ್ಠೆ ಮತ್ತು ಸ್ವಯಂ ನಿಯಂತ್ರಣ

ಯೇಸುವಿನ ಜೀವನ ಮತ್ತು ನಮಗಾಗಿ ಮರಣದಲ್ಲಿ ನಮ್ಮ ನಂಬಿಕೆಯ ಮೂಲಕ ದೇವರ ಪವಿತ್ರಾತ್ಮದಿಂದ ನಮ್ಮ ಜೀವನವು ಬದಲಾಗಿದ್ದರೆ, ನಮ್ಮ ಜೀವನದಲ್ಲಿ ಆಗುವ ಬದಲಾವಣೆಯು ನಮ್ಮ ನಂಬಿಕೆ ನಿಜವಾಗಿದೆ ಎಂಬುದಕ್ಕೆ ಪುರಾವೆಯನ್ನು ನೀಡುತ್ತದೆ. ಆತನ ಸಾವಿನಿಂದ ಆತನು ಸಾಧಿಸಿದ್ದು ನಮ್ಮ ಸಾಧನೆ ಎಂಬ ವಿಶ್ವಾಸವನ್ನು ಈ ಭರವಸೆಗಳು ನಮಗೆ ನೀಡುತ್ತವೆ.

ನಾವು ಪವಿತ್ರಾತ್ಮದ ಫಲದಿಂದ ರಕ್ಷಿಸಲ್ಪಟ್ಟಿಲ್ಲ. ನಮ್ಮನ್ನು ಉಳಿಸಿವುದು ನಮ್ಮ ಸ್ವಯಂ ನಿಯಂತ್ರಣದ ಅಭ್ಯಾಸ ಅಥವಾ ನಾವು ಹೊಂದಿರುವ ಶಾಂತಿಯಲ್ಲ. ಆದರೆ ನಾವು ಫಲವಿಲ್ಲದ ಜೀವನವನ್ನು ನಡೆಸುತ್ತಿದ್ದರೆ, ನಾವು ಕ್ರೈಸ್ತರೇ ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕು.

ಆತನ ರಕ್ತವೇ ನೀರು ಮತ್ತು ನಮ್ಮ ಜೀವನವೇ ಕೊಂಬೆಗಳು. ಬಲವಾಗಿ ಮತ್ತು ಪ್ರಬುದ್ಧರಾಗಿ ಬೆಳೆಯಲು ಮಗನ ಬೆಳಕಿನಲ್ಲಿ ಸಮಯ ಕಳೆಯಿರಿ.

ಇನ್ನಷ್ಟು ತಿಳಿಯಿರಿ

ಯೆಶಾಯ 52:13 - 53:12 ಅನ್ನು ಓದಿ, ಇದು ಯೇಸುವಿನ ವಾಸಿಸಿದ ಸುಮಾರು 700 ವರ್ಷಗಳ ಮುಂಚೆಯೇ ಬರೆಯಲಾದ ಭವಿಷ್ಯವಾಣಿಯ ಭಾಗ. ನಂತರ ಯೋಹಾನ 19:16-42 ಅನ್ನು ಓದಿ. ಈ ಭಾಗಗಳ ಬಗ್ಗೆ ನಿಮ್ಮ ಆಲೋಚನೆಗಳು ಮತ್ತು ಪ್ರಶ್ನೆಗಳನ್ನು ಬರೆದುಕೊಳ್ಳಿ ಮತ್ತು ಇನ್ನೊಬ್ಬ ಕ್ರೈಸ್ತನೊಂದಿಗೆ ಹಂಚಿಕೊಳ್ಳಿ. ನಿಮ್ಮನ್ನು ಗುಣಪಡಿಸಲು ಯೇಸು ಮರಣಹೊಂದಿದನು ಎಂಬ ಕಲ್ಪನೆಯು ನಿಮ್ಮ ಭಾವನೆಗಳ ಮೇಲೆ ಎಂತಹ ಪ್ರಭಾವ ಬೀರುತ್ತದೆ?

ಹಿಂದಿನದು List List ಮುಂದಿನದು