Languages

ಪಾಠ 4

ಯೇಸು ಸಾಯುವ ಮೂಲಕ ಏನನ್ನು ಸಾಧಿಸಿದನೆಂದು ನಾವು ಮಾತನಾಡುವಾಗ, ತನ್ನ ಬಗ್ಗೆ ಆತನು ಹೇಳಿಕೊಳ್ಳುವುದನ್ನು ನಂಬುವುದು ಆತನ ಭರವಸೆಗಳಿಗೆ ನಮಗೆ ಪ್ರವೇಶವನ್ನು ನೀಡುತ್ತದೆ ಎಂದು ನಾವು ನೋಡಿದ್ದೇವೆ, ಆದರೆ ಆತನ ಭರವಸೆಗಳು ನಮ್ಮ ಜೀವನದಲ್ಲಿ ನಿಜವಾಗಲು, ನಮ್ಮ ವರ್ತನೆ ಮತ್ತು ನಡವಳಿಕೆಯಲ್ಲಿ ಬದಲಾವಣೆಯ ಅಗತ್ಯವಿದೆ.

ಆತನು ತನ್ನ ಬಗ್ಗೆ ಏನು ಹೇಳುತ್ತಾನೆ ಮತ್ತು ನಮ್ಮ ಬಗ್ಗೆ ಏನು ಹೇಳುತ್ತಾನೆ ಎಂಬುದನ್ನು ಓದಿ, ಅದನ್ನು ನಂಬುವುದರೊಂದಿಗೆ ಬದಲಾವಣೆಯು ಪ್ರಾರಂಭವಾಗುತ್ತದೆ. ಯೇಸು ನಮ್ಮ ಬಗ್ಗೆ ಏನು ಹೇಳುತ್ತಾನೆ ಮತ್ತು ಹೊಲಿಕೆಯಲ್ಲಿ ತನ್ನ ಬಗ್ಗೆ ಏನು ಹೇಳುತ್ತಾನೆ ಎಂಬುದರ ಕೆಲವು ಉದಾಹರಣೆಗಳು ಇಲ್ಲಿವೆ.

  1. ಯೇಸು ಸಂಪೂರ್ಣವಾಗಿ ಒಳ್ಳೆಯವನು. ನಾವು ದುಷ್ಟತನದಿಂದ
    ತುಂಬಿದ್ದೇವೆ.
  2. ಯೇಸು ನಮ್ಮನ್ನು ಪ್ರೀತಿಸಿದನು. ನಾವು ಆತನನ್ನು ದ್ವೇಷಿಸಿದೆವು.
  3. ಯೇಸು ನಮ್ಮನ್ನು ಆರಿಸಿಕೊಂಡನು. ನಾವು ಆತನನ್ನು ತಿರಸ್ಕರಿಸಿದೆವು.
  4. ಯೇಸು ದೇವರಿಗೆ ಸಂಪೂರ್ಣವಾಗಿ ವಿಧೇಯನಾದನು.[9] ನಾವು ದೇವರ ನಿಯಮಗಳ ವಿರುದ್ಧ ತಿರುಗಿ ಬಿದ್ದೆವು.
  5. ತನ್ನ ಶತ್ರುಗಳಿಗಾಗಿ, ನಾವೂ ಸೇರಿದಂತೆ, ಯೇಸು ಮನಃಪೂರ್ವಕವಾಗಿ ಹಿಂಸೆಯನ್ನು ಅನುಭವಿಸಿದನು. ನಮ್ಮ ಪ್ರೀತಿಪಾತ್ರರಿಗಾಗಿಯೂ ಸಹ ನಾವು ಹಿಂಸೆಯನ್ನು ಅನುಭವಿಸಲು ಸಿದ್ಧರಿಲ್ಲ.
  6. ಯೇಸು ಶ್ರೇಷ್ಟ ಸೇವಕ. ನಾವು ಸೇವೆ ಮಾಡಲು ಬಯಸುವುದಿಲ್ಲ, ಸೇವೆ ಮಾಡಿಸಿಕೊಳ್ಳಲು ಮಾತ್ರ ಬಯಸುತ್ತೇವೆ.
  7. ಯೇಸು ಸಾವಿನಿಂದ ಎದ್ದು ಬಂದನು. ನಾವು ಸಮಾಧಿ ಸೇರುವುದು ಖಚಿತ, ಆದರೂ ಭರವಸೆ ಇದೆ ಏಕೆಂದರೆ ಯೇಸು ತನ್ನ ಜೀವನವನ್ನು ನಮಗೆ ನೀಡುತ್ತಾನೆ.

ಯೇಸು ದೇವರು, ಆದರೂ ನಿಜವಾಗಿ ಒಬ್ಬ ಮನುಷ್ಯ. ಆತನು ಇದುವರೆಗೂ ಜೀವಿಸಿದ ಅತಿ ಶ್ರೇಷ್ಠ ವ್ಯಕ್ತಿ ಮತ್ತು ನಾವು ಆತನ ಶತ್ರುಗಳಾಗಿದ್ದಾಗಲೂ ಆತನು ನಮ್ಮನ್ನು ಪ್ರೀತಿಸಲು ಮತ್ತು ನಮ್ಮ ಪ್ರೀತಿಯನ್ನು ಪಡೆಯಲು ಪ್ರಯತ್ನಿಸಿದನು.

ಯೇಸುವಿನ ಹತ್ತಿರ ಧೀನತೆಯಿಂದ ಸಮೀಪಿಸದಿದ್ದರೆ ಯಾರೂ ಬದಲಾಗಲು ಸಾಧ್ಯವಿಲ್ಲ. ಯೇಸು ಮಾಂತ್ರಿಕನಲ್ಲ. ಆತನು ನಮ್ಮ ಮನಸ್ಸಿನಲ್ಲಿರುವ ಪ್ರತಿಯೊಂದು ಆಲೋಚನೆಯನ್ನೂ ಬಲ್ಲ ವ್ಯಕ್ತಿ.

ದೇವರು ಅಹಂಕಾರಿಗಳನ್ನು ವಿರೋಧಿಸುತ್ತಾನೆ ಮತ್ತು ಧೀನರಿಗೆ ಅನುಗ್ರಹವನ್ನು ನೀಡುತ್ತಾನೆ ಎಂದು ಬೈಬಲ್ ಹೇಳುತ್ತದೆ. ನಮಗೆ ಬೇಕಾದುದನ್ನು ಪಡೆಯಲು ಯೇಸುವನ್ನು ಬಳಸುವ ಉದ್ದೇಶದಿಂದ ನಾವು ಆತನನ್ನು ಸಮೀಪಿಸಿದರೆ, ನಾವು ಆತನಿಂದ ಎಂದಿಗೂ ಸ್ವಾಗತಿಸಲ್ಪಡುವುದಿಲ್ಲ. ನಮ್ಮ ದುಷ್ಟತನದಿಂದ ದೂರಾಗಿ ಅದನ್ನು ದ್ವೇಷಿಸಲು ಪ್ರಾರಂಭಿಸದ ಹೊರತು ಮತ್ತು ಆತನ ಒಳ್ಳೆಯತನವನ್ನು ಆರಿಸಿಕೊಳ್ಳದ ಹೊರತು, ನಾವು ಆತನನ್ನು ಅಥವಾ ಆತನ ಭರವಸೆಗಳ ಪ್ರಯೋಜನವನ್ನು ಎಂದಿಗೂ ತಿಳಿಯಲು ಸಾಧ್ಯವಿಲ್ಲ.

ದುಷ್ಟತನದ ಬಗ್ಗೆ ವಿಷಾದದ ಈ ಮನೋಭಾವವು, ಯೇಸುವಿನ ಒಳ್ಳೆಯತನದ ಉತ್ಕಟ ಬಯಕೆ ಮತ್ತು ಆತನ ಭರವಸೆಗಳಲ್ಲಿ ದೃಢವಾದ ನಂಬಿಕೆ ನಮ್ಮ ಹೊಸ ಜೀವನದಲ್ಲಿ ಸಾಮಾನ್ಯವಾಗುತ್ತದೆ. ಬೈಬಲ್‌ನಲ್ಲಿ ಆತನು ಹೇಳುವುದನ್ನು ನಾವು ಓದಿದಾಗ, ಆತನನ್ನು ಪ್ರಾರ್ಥಿಸಿ ಆತನ ಬಯಕೆಯನ್ನು ಅರಸಿದಾಗ, ನಮ್ಮ ವರ್ತನೆಗಳು ಅಹಂಕಾರದಿಂದ ಧೀನತೆಗೆ ಬದಲಾಗುತ್ತವೆ. ನಾವು ಆತನಂತೆ ಆಗಲು ಪ್ರಾರಂಭಿಸುತ್ತೇವೆ.

ಯೇಸು ನಮ್ಮ ಹೃದಯವನ್ನು ನೋಡುತ್ತಾನೆ. ನಾವು ದುಷ್ಟತನವನ್ನು ದ್ವೇಷಿಸಲು ಮತ್ತು ಅದರ ಜಾಗದಲ್ಲಿ ಆತನ ಒಳ್ಳೆಯತನವನ್ನು ಬಯಸಲು ಪ್ರಾರಂಭಿಸಬೇಕು. ನಂತರ, ನಮ್ಮನ್ನು ಕ್ಷಮಿಸುವಂತೆ ನಾವು ಯೇಸುವನ್ನು ಕೇಳಿದಾಗ, ಆತನು ಅದನ್ನು ಮಾಡುತ್ತಾನೆ.

ನಾವು ಆತನನ್ನು ನಿಜವಾದ ಧೀನತೆಯಿಂದ ಸಮೀಪಿಸಿದಾಗ, ಆತನು ನಮ್ಮ ದೋಷಗಳನ್ನು ನೋಡುತ್ತಾನೆ ಮತ್ತು ನಮ್ಮ ಹೃದಯವನ್ನು ಗುಣಪಡಿಸಲು ಪ್ರಾರಂಭಿಸುತ್ತಾನೆ. ನಾವು ನಮ್ಮನ್ನು ಪ್ರಾಮಾಣಿಕವಾಗಿ ನೋಡಿದಾಗ ಮತ್ತು ದೇವರು ಪ್ರೀತಿಸಲು ಮತ್ತು ಆತನ ಒಳ್ಳೆಯತನದತ್ತ ಬೆಳೆಯಲು ನಮ್ಮನ್ನು ಆಯ್ಕೆಮಾಡಿದ್ದಾನೆ ಎಂಬ ಸತ್ಯದೊಂದಿಗೆ ನಮ್ಮ ಜೀವನವನ್ನು ನಡೆಸಲು ಒಪ್ಪಿದಾಗ, ದೇವರು ನಮಗೆ ಜೀವನ, ಸಂತೋಷ ಮತ್ತು ಪ್ರೀತಿಯನ್ನು ನೀಡುತ್ತಾನೆ.

ಈ ಪ್ರಕ್ರಿಯೆಯಲ್ಲಿ ಆತನು ನಮ್ಮನ್ನು ಹೇಗೆ ಸೇರಿಸಿಕೊಳ್ಳುತ್ತಾನೆ ಎಂಬುದು ಎಷ್ಟು ಸುಂದರವಾಗಿದೆಯಲ್ಲವೇ?

ನಿಮ್ಮ ದುಷ್ಟತನದಿಂದ ದೂರವಾಗಿ, ಬದಲಿಗೆ ಯೇಸುವಿನ ಕಡೆಗೆ ತಿರುಗಿ. ಬೈಬಲ್‌ನಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಪ್ರಾರ್ಥನೆಯಲ್ಲಿ ತಲ್ಲೀನರಾಗಿ. ಯೇಸು ಯಾರು ಮತ್ತು ಆತನು ನಿಮ್ಮೊಳಗೆ ಮತ್ತು ನಿಮ್ಮ ಮೂಲಕ ಏನು ಮಾಡುವುದಾಗಿ ಭರವಸೆ ನೀಡಿದ್ದಾನೆ ಎಂಬುದರ ಕುರಿತು ಧ್ಯಾನಿಸಿ. ಆತನನ್ನು ಮೆಚ್ಚಿಸಲು ಮತ್ತು ಆತನೊಂದಿಗೆ ನಿಕಟ ಸ್ನೇಹದಲ್ಲಿ ಬದುಕಲು ಆತನಿಗೆ ಶರಣಾಗಿ. ಆತನ ಪ್ರೀತಿ ಮತ್ತು ಭರವಸೆಗಳೇ ನಿಮಗೆ ಶುದ್ಧ ಜೀವನವನ್ನು ನಡೆಸಲು ಶಕ್ತಿ ಮತ್ತು ಅಧಿಕಾರವನ್ನು ನೀಡುತ್ತವೆ ಎಂಬುದನ್ನು ನೆನಪಿಡಿ.

ನಿಮ್ಮ ದುಷ್ಟತನದಿಂದ ದೂರವಾಗಿ, ಬದಲಿಗೆ ಯೇಸುವಿನ ಕಡೆಗೆ ತಿರುಗಿ. ಬೈಬಲ್‌ನಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಪ್ರಾರ್ಥನೆಯಲ್ಲಿ ತಲ್ಲೀನರಾಗಿ. ಯೇಸು ಯಾರು ಮತ್ತು ಆತನು ನಿಮ್ಮೊಳಗೆ ಮತ್ತು ನಿಮ್ಮ ಮೂಲಕ ಏನು ಮಾಡುವುದಾಗಿ ಭರವಸೆ ನೀಡಿದ್ದಾನೆ ಎಂಬುದರ ಕುರಿತು ಧ್ಯಾನಿಸಿ. ಆತನನ್ನು ಮೆಚ್ಚಿಸಲು ಮತ್ತು ಆತನೊಂದಿಗೆ ನಿಕಟ ಸ್ನೇಹದಲ್ಲಿ ಬದುಕಲು ಆತನಿಗೆ ಶರಣಾಗಿ. ಆತನ ಪ್ರೀತಿ ಮತ್ತು ಭರವಸೆಗಳೇ ನಿಮಗೆ ಶುದ್ಧ ಜೀವನವನ್ನು ನಡೆಸಲು ಶಕ್ತಿ ಮತ್ತು ಅಧಿಕಾರವನ್ನು ನೀಡುತ್ತವೆ ಎಂಬುದನ್ನು ನೆನಪಿಡಿ.

ಇದೊಂದು ನಿರಂತರ, ದೈನಂದಿನ ಪ್ರಕ್ರಿಯೆ. ನೀವು ವಿಫಲರಾದಾಗ, ತಪ್ಪಿತಸ್ಥ ಭಾವನೆ ಅಥವಾ ಹತಾಶತೆಯ ಭಾವನೆಯ ಬಲೆಯಲ್ಲಿ ಸಿಕ್ಕಿಬೀಳಬೇಡಿ. ನೀವು ವಿಫಲವಾಗುವ ಕ್ಷಣವೇ ನೀವು ಹೆಚ್ಚು ದೇವರ ಸಹಾಯ ಕೇಳಬೇಕಾದ ಕ್ಷಣವಾಗಿದೆ. ನಿಮ್ಮ ದುಷ್ಟತನವು ದೇವರಿಗಿಂತ ಹೆಚ್ಚು ಶಕ್ತಿಯುತವಾಗಿದೆ ಎಂಬ ಕಲ್ಪನೆಯು ಹಾಸ್ಯಾಸ್ಪದ ಮತ್ತು ಅಹಂಕಾರದ ಸಂಗತಿ. ನೀವು ಆತನ ವಿರುದ್ಧ ಜೀವಿಸಿದಾಗಲೂ ಯೇಸು ನಿಮ್ಮನ್ನು ಪ್ರೀತಿಸಿದನು. ಈಗ ನೀವು ಆತನ ಮಗುವಾಗಿರುವಾಗ ಆತನು ಖಂಡಿತ ನಿಮ್ಮನ್ನು ಕ್ಷಮಿಸುತ್ತಾನೆ! ಆತನು ನಿಮ್ಮ ದುಷ್ಟತನಕ್ಕಿಂತ ಹೆಚ್ಚು ಬಲಶಾಲಿ ಮತ್ತು ನೀವು ನಿಮ್ಮನ್ನು ದ್ವೇಷಿಸುವುದಕ್ಕಿಂತ ಹೆಚ್ಚಾಗಿ ಆತನು ನಿಮ್ಮನ್ನು ಪ್ರೀತಿಸುತ್ತಾನೆ. ಅದನ್ನು ನಂಬಿರಿ, ಆಗ ನೀವು ಭರವಸೆಯನ್ನು ಕಳೆದುಕೊಳ್ಳುವುದಿಲ್ಲ.

ಇನ್ನಷ್ಟು ತಿಳಿಯಿರಿ

1 ಯೋಹಾನ 1, ಎಫೆಸದವರಿಗೆ 5: 8 ಮತ್ತು ಯೋಹಾನ 11: 9-10 ಗಳನ್ನು ಓದಿ, ನಂತರ ಕ್ಷಮೆಯ ಬಗ್ಗೆ ನಿಮಗಿರುವ ತಿಳುವಳಿಕೆಯನ್ನು ಮತ್ತು ನಿಮಗೆ “ಬೆಳಕಿನಲ್ಲಿ ನಡೆಯಿರಿ” ಎಂಬ ನುಡಿಗಟ್ಟಿನ ಅರ್ಥ ಏನು ಎಂಬುದನ್ನು ಬರೆಯಿರಿ. ಅದರ ಬಗ್ಗೆ ಪ್ರಾರ್ಥಿಸಿ, ನಂತರ ಒಬ್ಬ ವಿಶ್ವಾಸಾರ್ಹ ಕ್ರೈಸ್ತ ಸ್ನೇಹಿತನೊಂದಿಗೆ ಪ್ರಾಮಾಣಿಕವಾಗಿ ಚರ್ಚಿಸಿ. ನೀವು ಬೆಳಕಿನಲ್ಲಿ ನಡೆಯುತ್ತಿದ್ದೀರಾ? ಇಲ್ಲದಿದ್ದರೆ, ಬೆಳಕಿನೆಡೆಗೆ ಹೆಜ್ಜೆ ಹಾಕಲು ನೀವು ಇಂದು ಯಾವ ಬದಲಾವಣೆಯನ್ನು ಮಾಡಿಕೊಳ್ಳಬಹುದು?

ಹಿಂದಿನದು List List ಮುಂದಿನದು