Languages

ಪಾಠ 1

ಒಂದು ಒಳ್ಳೆಯ ಸುದ್ದಿ ಇದೆ. ದೇವರು ನಮಗೆ ನಮ್ಮನ್ನು ಪ್ರೀತಿಸುವ ಮತ್ತು ಕ್ಷಮಿಸುವ ಭರವಸೆ ನೀಡುತ್ತಾನೆ, ಅನಂತ ಜೀವನ, ದುಷ್ಟತನದಿಂದ ಸ್ವಾತಂತ್ರ್ಯ ಮತ್ತು ಪ್ರೀತಿಯಲ್ಲಿ ನಾವು ಆತನನ್ನು ನಂಬುವ ಮತ್ತು ಪಾಲಿಸುವವರೆಗೂ ಆತನೊಂದಿಗೆ ನಿಕಟ ಸ್ನೇಹವನ್ನು ನೀಡುತ್ತಾನೆ.

ನೀವು ಇದನ್ನು ನಂಬುತ್ತೀರಾ? ನಿಮಗಾಗಿ ಇದರ ಅರ್ಥ ಏನು ಎಂಬುದು ನಿಮಗೆ ತಿಳಿದಿದೆಯೇ?

ನಾವು ದೇವರನ್ನು ಪ್ರೀತಿಸಲು, ಪಾಲಿಸಲು ಮತ್ತು ಎಂದೆಂದಿಗೂ ಆನಂದಿಸಲು ಹುಟ್ಟಿದ್ದೇವೆ, ಆದರೆ ಅದು ನಮ್ಮಿಂದ ಸಾಧ್ಯವಿಲ್ಲ ಎಂದು ಬೈಬಲ್ ಹೇಳುತ್ತದೆ.

ಏಕೆ?

ಏಕೆಂದರೆ ನಾವು ಆತನಿಂದ ಎರಡು ರೀತಿಯಲ್ಲಿ ಬೇರ್ಪಟ್ಟು ಜನಿಸಿದ್ದೇವೆ.

ಮೊದಲನೆಯದಾಗಿ, ನಾವು ಅವನನ್ನು ತಿಳಿದಿಲ್ಲ ಮತ್ತು ನಮಗೆ ತಿಳಿದಿಲ್ಲದ ವ್ಯಕ್ತಿಯನ್ನು ನಾವು ಪ್ರೀತಿಸಲು ಸಾಧ್ಯವಿಲ್ಲ.

ಎರಡನೆಯದಾಗಿ, ನಾವು ದೇವರ ಜೀವನ, ಜ್ಞಾನ ಮತ್ತು ಪ್ರೀತಿಯಿಂದ ನಮ್ಮನ್ನು ಬೇರ್ಪಡಿಸುವ ದುಷ್ಟ ಬಯಕೆಗಳೊಂದಿಗೆ ಹುಟ್ಟಿದ್ದೇವೆ. ನಮ್ಮ ದುಷ್ಟ ಬಯಕೆಗಳು ಸಾವು, ಅನಾರೋಗ್ಯ, ಅನ್ಯಾಯ, ಯುದ್ಧ - ಜೀವನದ ಎಲ್ಲಾ ದುಃಖಗಳಿಗೆ ಕಾರಣವಾಗಿವೆ.

ನಮ್ಮ ದುಷ್ಟ ಬಯಕೆಗಳು ನಮ್ಮನ್ನು ದೇವರಿಂದ ಹೇಗೆ ಬೇರ್ಪಡಿಸುತ್ತವೆ?

ದುಷ್ಟತನ ತಿರುಳು ಸ್ವಾರ್ಥವಾಗಿದ್ದು, ಅದು ಸಂಬಂಧಗಳಿಗೆ ಹಾನಿ ಉಂಟುಮಾಡುತ್ತದೆ. ಒಬ್ಬ ಪುರುಷನು ತನ್ನ ಹೆಂಡತಿಗೆ ಹತ್ತಿರವಾಗುತ್ತಿದ್ದಂತೆ, ಅವನ ಮಾತುಗಳು, ಕೆಲಸಗಳು ಮತ್ತು ಆಲೋಚನೆಗಳು ಅವಳನ್ನು ಹೇಗೆ ನೋಯಿಸಬಹುದು ಎಂಬುದನ್ನು ಸುಲಭವಾಗಿ ಗುರುತಿಸುತ್ತಾನೆ. ದೇವರೊಂದಿಗಿನ ನಮ್ಮ ಸಂಬಂಧವೂ ಹಾಗೇ. ನಾವು ದೇವರಿಗೆ ಹೆಚ್ಚು ಹತ್ತಿರವಾಗುತ್ತಿದ್ದಂತೆ, ನಮ್ಮ ದುಷ್ಟತನ ಅವನೊಂದಿಗಿನ ನಿಕಟತೆಯನ್ನು ಹೇಗೆ ದೂರ ಮಾಡುತ್ತದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ.

ನಾವು ಅವನಿಂದ ಬೇರ್ಪಟ್ಟಾಗ ದೇವರ ಪ್ರತಿಕ್ರಿಯೆ ಏನಾಗಿತ್ತು?

ನಮ್ಮೊಂದಿಗೆ ನಿಕಟ ಸ್ನೇಹವನ್ನು ಪುನಃಸ್ಥಾಪಿಸಲು ದೇವರು ಮನುಷ್ಯನಾಗಲು ನಿರ್ಧರಿಸಿದನು. ಆ ವ್ಯಕ್ತಿಯೇ ಯೇಸು.

ದೇವರು ಮನುಷ್ಯನಾಗುವುದು ಏಕೆ ಮುಖ್ಯವಾಗಿತ್ತು?

ಮೊದಲನೆಯದಾಗಿ, ನಮ್ಮೊಂದಿಗೆ ವೈಯಕ್ತಿಕ ಸಂಬಂಧ ಬೆಳೆಸಲು. ಎರಡನೆಯದಾಗಿ, ನಮ್ಮ ಸಂತೋಷ, ನೋವು ಮತ್ತು ಹೋರಾಟವನ್ನು ಅನುಭವಿಸಲು. ಮೂರನೆಯದಾಗಿ, ನಮ್ಮ ಬದಲಿಗೆ ಸಾಯುವ ಮೂಲಕ ನಮ್ಮ ದುಷ್ಟತನಕ್ಕೆ ಶಿಕ್ಷೆಯನ್ನು ಅನುಭವಿಸುವುದು. ಮತ್ತು ನಾಲ್ಕನೆಯದಾಗಿ, ನಮ್ಮ ದುಷ್ಟತನವನ್ನು ತೊಡೆದುಹಾಕಲು ಮತ್ತೆ ಬದುಕಿ ಬಂದು, ಆತನೊಂದಿಗೆ ನಿಕಟ ಸ್ನೇಹವನ್ನು ಮತ್ತು ಕೊನೆಯಿರದ ಜೀವನವನ್ನು ನಮಗೆ ನೀಡುವುದು.

ಯೇಸು ನಮಗಾಗಿ ಸಾಯಲು ನಿರ್ಧರಿಸಿದ್ದು ಭಾಗಶಃ ದೇವರು ದುಷ್ಟತನವನ್ನು ಶಿಕ್ಷಿಸುತ್ತಾನೆ ಎಂದು ಸಾಬೀತುಪಡಿಸಲು. ದುಷ್ಟತನವನ್ನು ಶಿಕ್ಷಿಸದ ದೇವರು ನಮಗೆ ಬೇಡ. ಯೇಸುವಿನ ಮರಣವು ದೇವರು ಹಾಗೆ ಮಾಡುವುದಿಲ್ಲ ಎಂಬುದಕ್ಕೆ ಒಂದು ಸಾಕ್ಷಿಯಾಗಿದೆ, ಏಕೆಂದರೆ ಆತನು ಎಂದಿಗೂ ತಪ್ಪು ಮಾಡದಿದ್ದರೂ ನಮ್ಮ ದುಷ್ಟತನಕ್ಕಾಗಿ ತನ್ನನ್ನು ತಾನೇ ಶಿಕ್ಷಿಸಿಕೊಳ್ಳಲು ಆತನು ನಿರ್ಧರಿಸಿದನು.

ನಮ್ಮ ದುಷ್ಟ ಬಯಕೆಗಳಿಂದ ನಮ್ಮನ್ನು ಮುಕ್ತಗೊಳಿಸಿ, ನಮ್ಮ ಹೃದಯವನ್ನು ಪರಿವರ್ತಿಸಿ ನಾವು ಆತನೊಂದಿಗೆ ಶುದ್ಧ ಸ್ನೇಹದಿಂದ ಬದುಕುವಂತೆ ಮಾಡಬಹುದು ಎಂಬುದು ಆತನ ಮಹಾನ್ ಉದ್ದೇಶವಾಗಿತ್ತು. ಇದನ್ನೇ ಬೈಬಲ್ “ಹೊಸದಾಗಿ ಹುಟ್ಟುವುದು” ಎಂದು ಸೂಚಿಸುತ್ತದೆ. ಇದರರ್ಥ ಸಂಪೂರ್ಣವಾಗಿ ಬದಲಾಗುವುದು, ನಮ್ಮ ದುಷ್ಟ ಆಸೆಗಳ ಗುಲಾಮಗಿರಿಯಿಂದ ಮುಕ್ತರಾಗಿ ದೇವರೊಂದಿಗೆ ನಿಕಟ ಸಂಬಂಧದಲ್ಲಿ ಬದುಕುವುದು.

ಅಂದರೆ ಯೇಸು ನಮ್ಮ ಶಿಕ್ಷೆಯನ್ನು ತೆಗೆದುಕೊಳ್ಳುವುದಷ್ಟೇ ಒಳ್ಳೆಯ ಸುದ್ದಿಯ ಮುಕ್ತಾಯವಲ್ಲ.

ಯೇಸು ಸತ್ತ ನಂತರ, ಮತ್ತೆ ಸಜೀವಿಯಾದನು ಮತ್ತು ಇನ್ನೂ ಜೀವಂತವಾಗಿದ್ದಾನೆ ಎಂದು ಬೈಬಲ್ ಹೇಳುತ್ತದೆ. ಆತನು ನಮಗೆ ಜೀವನದ ವಿನಿಮಯವನ್ನು ನೀಡುತ್ತಾನೆ: ನಮ್ಮ ದೋಷಪೂರಿತ ಜೀವನಕ್ಕೆ ಬದಲಾಗಿ ಆತನ ಪರಿಪೂರ್ಣ ಜೀವನ. ಈ ನಂಬಲಸಾಧ್ಯ ಕೊಡುಗೆಯನ್ನು ನಾವು ಸ್ವೀಕರಿಸಿದಾಗ, ಪವಿತ್ರಾತ್ಮನು ನಮ್ಮೊಳಗೆ ವಾಸಿಸಲು ಪ್ರಾರಂಭಿಸುತ್ತಾನೆ ಮತ್ತು ಆತನ ಒಳ್ಳೆಯತನಕ್ಕಾಗಿ ಬೆಳೆಯುವ ಬಯಕೆಯು ಕ್ರಮೇಣ ನಮ್ಮ ಈವಿಲ್ ಆಸೆಗಳ ಜಾಗವನ್ನು ಪಡೆಯುತ್ತದೆ.

ನಮ್ಮನ್ನು ಶುದ್ಧೀಕರಿಸುವ ಮತ್ತು ಪರಿಪೂರ್ಣಗೊಳಿಸುವ ಪ್ರಕ್ರಿಯೆಯನ್ನು ಪವಿತ್ರೀಕರಣ ಎಂದು ಕರೆಯಲಾಗುತ್ತದೆ. ಈ ಜೀವನ ಮುಗಿಯುವವರೆಗೂ ನಾವು ಪರಿಪೂರ್ಣರಾಗಿರುವುದಿಲ್ಲ. ಆದರೂ ಈ ಪ್ರಕ್ರಿಯೆಯು ತಕ್ಷಣವೇ ಪ್ರಾಯೋಗಿಕ ಫಲಿತಾಂಶಗಳನ್ನು ನೀಡುತ್ತದೆ.

ಆ ಫಲಿತಾಂಶಗಳನ್ನು ಪವಿತ್ರಾತ್ಮದ ಫಲ ಎಂದು ಕರೆಯಲಾಗುತ್ತದೆ: ಪ್ರೀತಿ, ಸಂತೋಷ, ಶಾಂತಿ, ತಾಳ್ಮೆ, ದಯೆ, ಒಳ್ಳೆಯತನ, ಸೌಮ್ಯತೆ, ನಿಷ್ಠೆ ಮತ್ತು ಸ್ವಯಂ ನಿಯಂತ್ರಣ. ನಾವು ಕ್ರೈಸ್ತರಾದರೆ, ನಾವು ಈ ಗುಣಲಕ್ಷಣಗಳನ್ನು ಬೆಳೆಸಿಕೊಳ್ಳುತ್ತೇವೆ. ನಾವು ಕ್ರೈಸ್ತರಲ್ಲದಿದ್ದರೆ, ಬೈಬಲ್ ಓದುವ ಮೂಲಕ, ದುಷ್ಟತನದಿಂದ ದೂರವಾಗುವ ಮೂಲಕ, ಪ್ರಾರ್ಥಿಸುವ ಮತ್ತು ಆರಾಧಿಸುವ ಮೂಲಕ ದೇವರಿಗೆ ಶರಣಾಗಲು ಮತ್ತು ಆತನಿಗೆ ಹತ್ತಿರವಾಗಲು ಇದು ಸರಿಯಾದ ಸಮಯ.

ನಾವು ಪವಿತ್ರಾತ್ಮದ ಫಲವನ್ನು ಬೆಳೆಸಲು ಸಾಧ್ಯವಿಲ್ಲ. ನಾವು ಕ್ರಿಸ್ತನ ಮೇಲಿನ ನಮ್ಮ ಪ್ರೀತಿಯನ್ನು ವ್ಯಕ್ತಪಡಿಸುವಾಗ ಪವಿತ್ರಾತ್ಮನು ಮಾತ್ರ ಅದನ್ನು ಮಾಡಬಲ್ಲನು.

ನಾವು ಶಿಲುಬೆಯನ್ನು ನಮ್ಮದಾಗಿಸಿಕೊಂಡು ಯೇಸುವನ್ನು ಹಿಂಬಾಲಿಸಬೇಕು ಎಂದು ಬೈಬಲ್ ಹೇಳುತ್ತದೆ. ಆ ನುಡಿಗಟ್ಟು ನಮ್ಮ ಸ್ವಾರ್ಥದ ಸಾವನ್ನು ಪ್ರತಿನಿಧಿಸುವ ಸಂಕೇತ. ಯೇಸು ತನ್ನ ಶಿಲುಬೆಯನ್ನು (ಒಂದು ಚಿತ್ರಹಿಂಸೆಯ ಸಾಧನ!) ಹೊತ್ತುಕೊಂಡು, ಅದರ ಮೇಲೆ ಮರಣ ಹೊಂದಿದಂತೆ, ನಾವೂ ಸಾಂಕೇತಿಕವಾಗಿ ನಮ್ಮ ಸ್ವಾರ್ಥದ ಸಾವಿನ ಮೂಲಕ ಅದನ್ನು ತೋರಬೇಕಿದೆ.

ಇದು ಏಕೆ ಮುಖ್ಯ? ಏಕೆಂದರೆ ನಮ್ಮ ಸ್ವಾರ್ಥ ಆಸೆಗಳು ದೇವರ ಆಸೆಗಳೊಂದಿಗೆ ಯುದ್ಧದಲ್ಲಿವೆ.[25] ಯೇಸುವಿಗೆ ಸಂಪೂರ್ಣ ಶರಣಾಗತಿ ಮತ್ತು ನಂಬಿಕೆಯ ಅಗತ್ಯವಿದೆ. ದೇವರ ಬಯಕೆಗಾಗಿ ನಮ್ಮ ಸ್ವಾರ್ಥ ಆಸೆಗಳನ್ನು ವಿನಿಮಯ ಮಾಡಿಕೊಳ್ಳಬೇಕೆಂದು ಆತನು ಹೇಳುತ್ತಾನೆ. ಇದು ದೇವರಿಗೆ ಮತ್ತು ಆತನ ಜನರಿಗೆ ನಮ್ರವಾದ ಸೇವೆಯ ಮೂಲಕ ನಮ್ಮ ಪ್ರೀತಿಯನ್ನು ತೋರಿಸುವುದಕ್ಕಾಗಿ ಆಗಿದೆ.

ನಾವು ಶರಣಾಗಿ ದೇವರನ್ನು ನಮ್ಮ ಏಕೈಕ ಸಂತೃಪ್ತಿಯಾಗಿ ಆರಿಸಿಕೊಂಡಾಗ, ಆತನು ನಮಗೆ ಆತನಿಗೆ ವಿಧೇಯರಾಗುವ ಶಕ್ತಿ ಮತ್ತು ಬಯಕೆಯನ್ನು ನೀಡುತ್ತಾನೆ. ಇದು ನಮ್ಮ ಉಸಿರಾಡುವ ಗಾಳಿಯಾಗಲು ಆತನಿಗೆ ಅವಕಾಶ ನೀಡಿದಂತೆ. ಯೇಸುವಿನಲ್ಲೇ ಉಸಿರಾಡುವುದು. ಯೇಸುವನ್ನೇ ಉಸಿರಾಡುವುದು. ಮತ್ತೆ ಮತ್ತೆ. ಪ್ರತಿ ದಿನ. ಸಾಯುವ ದಿನದವರೆಗೂ. ನಮ್ಮ ಶತ್ರುಗಳನ್ನು ಪ್ರೀತಿಯಿಂದ ನಡೆಸಿಕೊಳ್ಳುವಂತೆ ಆತನು ನಮಗೆ ಆಜ್ಞಾಪಿಸಿದಾಗ, ಅದನ್ನು ಮಾಡಲು ಆತನು ನಮಗೆ ಸಹಾಯ ಮಾಡುತ್ತಾನೆ ಎಂದು ನಂಬಲು ಇದು ನಮಗೆ ಧೈರ್ಯವನ್ನು ನೀಡುತ್ತದೆ.

ಯೇಸುವಿನೊಂದಿಗಿನ ನಮ್ಮ ಸಂಬಂಧವು ನಾವು ಅನುಭವಿಸಬಹುದಾದ ಅತ್ಯಂತ ನಿಕಟ ಸಂಬಂಧವಾಗಿದೆ ಏಕೆಂದರೆ ಆತನ ಪವಿತ್ರಾತ್ಮವು ನಮ್ಮೊಳಗೆ ಇದೆ. ನೀವು ಪ್ರೀತಿಯಿಂದ ದೇವರನ್ನು ನಂಬಿ ಪಾಲಿಸಿದಾಗ ಈ ಸಂಬಂಧವು ನಿಮ್ಮ ಜೀವನವನ್ನು ಬದಲಾಯಿಸುತ್ತದೆ. ನಂತರ, ನೀವು ತಪ್ಪುಗಳನ್ನು ಮಾಡಿದಾಗ, ದೇವರನ್ನು ಗೌರವಿಸಲು ಆತನು ನಿಮಗೆ ಸಹಾಯ ಮಾಡುತ್ತಾನೆ.

ಈ ರೀತಿಯ ಜೀವನವು ನಿಮ್ಮನ್ನು ಸಾಮಾನ್ಯ ಜೀವನವನ್ನು ಆನಂದಿಸದಂತೆ ತಡೆಯುತ್ತದೆಯೇ ಎಂದು ನೀವು ಆಶ್ಚರ್ಯ ಪಡುತ್ತಿರಬಹುದು. ದೇವರನ್ನು ಪ್ರೀತಿಸುವುದು ಮತ್ತು ಆತನಿಗೆ ವಿಧೇಯರಾಗುವುದು ಜೀವನದಲ್ಲಿ ದೇವರ ಶಾಂತಿ ಮತ್ತು ಸಂತೋಷವನ್ನು ಆನಂದಿಸಲು ನಮಗೆ ಅನುವು ಮಾಡಿಕೊಟ್ಟಿದೆ ಎಂದು ತಿಳಿಸಲು ನಾವು ಸಂತೋಷಪಡುತ್ತೇವೆ.

ಈ ಜೀವನದಲ್ಲಿ ನಾವು ಎಂದಿಗೂ ದುಷ್ಟ ಆಸೆಗಳಿಂದ ಸಂಪೂರ್ಣವಾಗಿ ಮುಕ್ತರಾಗದಿದ್ದರೂ, ನಾವು ಇನ್ನೂ ತಪ್ಪುಗಳನ್ನು ಮಾಡುತ್ತಿದ್ದರೂ, ಯೇಸುವಿನ ಮೇಲಿನ ನಮ್ಮ ಪ್ರೀತಿಯು ನಮ್ಮ ದುಷ್ಟ ಆಸೆಗಳನ್ನು ಉಪವಾಸ ಕೆಡವುತ್ತವೆ ಮತ್ತು ಅವು ದುರ್ಬಲವಾಗುತ್ತವೆ. ನಾವು ದೇವರನ್ನು, ಪ್ರಪಂಚವನ್ನು ಮತ್ತು ಆತನು ನಮಗೆ ನೀಡಿರುವ ಸಂಬಂಧಗಳನ್ನು ಪರಿಶುದ್ಧತೆಯಿಂದ ಆನಂದಿಸಲು ಸ್ವತಂತ್ರರಾಗಲು ಆತನು ಹೀಗೆ ಮಾಡುತ್ತಾನೆ.

ನಮ್ಮಲ್ಲಿ ಹೆಚ್ಚಿನವರು ನಂಬಲು ಕಷ್ಟಪಡುವ ಭರವಸೆಯೆಂದರೆ ದೇವರು ನಮ್ಮ ಆಸೆಗಳನ್ನು ಬದಲಾಯಿಸುತ್ತಾನೆ ಎಂಬುದು. ಆತನು ಹಾಗೆ ಮಾಡುತ್ತಾನೆ. ಇದು ನಿಜ. ಇಲ್ಲದಿದ್ದರೆ, ಒಳ್ಳೆಯ ಸುದ್ದಿಯು ಒಳ್ಳೆಯ ಸುದ್ದಿಯಾಗುತ್ತಿರಲಿಲ್ಲ.

ಹೆಚ್ಚಿನ ಕ್ರೈಸ್ತರ ಜೀವನ ಏಕೆ ಉತ್ತಮವಾಗಿಲ್ಲ?

ಪ್ರತಿ ಕ್ರೈಸ್ತನು ದುಷ್ಟತನದಿಂದ ಮುಕ್ತವಾಗಿ ಬದುಕಬಹುದು, ಆದರೆ ಕೆಲವು ಬಾರಿ ನಾವು ಅದನ್ನು ನಿರಾಕರಿಸುತ್ತೇವೆ. ಕೆಲವೊಮ್ಮೆ ನಾವು ಕ್ರೈಸ್ತರಾದ ನಂತರವೂ ಯೇಸುವಿನ ಬದಲು ದುಷ್ಟತನವನ್ನು ಆರಿಸಿಕೊಳ್ಳುತ್ತೇವೆ.

ಕೆಲವರು ದುಷ್ಟತನದಿಂದ ಮುಕ್ತಿಯನ್ನು ಪಡೆಯುವುದಿಲ್ಲ ಏಕೆಂದರೆ ಅದು ಸಾಧ್ಯ ಅಥವಾ ದೇವರು ಅದನ್ನು ಸಾದ್ಯವಾಗಿಸುತ್ತಾನೆ ಎಂದು ಅವರು ನಂಬುವುದಿಲ್ಲ. ಇತರರು ದುಷ್ಟತನದಿಂದ ಮುಕ್ತವಾಗಿ ಬದುಕಲು ನಿರಾಕರಿಸುತ್ತಾರೆ ಏಕೆಂದರೆ ಅದು ದುಬಾರಿ. ಏಕೆಂದರೆ ಇದನ್ನು ಸಾಧ್ಯವಾಗಿಸಲು ದೇವರಿಗೆ ಸಂಪೂರ್ಣ, ನಿರಂತರ ಶರಣಾಗತಿ ಬೇಕು

ಇದರ ಅರ್ಥವೇನು?

ನಾವು ದೇವರಿಗೆ ಶರಣಾದ ನಂತರ, ಶರಣಾಗತಿಯನ್ನು ಮುಂದುವರಿಸಲು ನಮಗೆ ಆಜ್ಞಾಪಿಸಲಾಗಿದೆ. ಇದು ನಿರಂತರವಾಗಿ ನಡೆಯುತ್ತಿರಬೇಕು ಏಕೆಂದರೆ ನಾವೆಲ್ಲರೂ ಸ್ವಾರ್ಥಕ್ಕೆ ಮರಳುವ ಸಾಧ್ಯತೆಗಳು ಹೆಚ್ಚು. ಬೈಬಲ್ ಈ ಪ್ರವೃತ್ತಿಯನ್ನು ಪಾಪ ಸ್ವಭಾವ ಎಂದು ಕರೆಯುತ್ತದೆ. ನಾವು ಹುಟ್ಟಿದ ದಿನದಿಂದ ಸಾಯುವ ದಿನದವರೆಗೂ ಅದು ನಮ್ಮಲ್ಲಿ ಇರುತ್ತದೆ.

ನಾವು ದೇವರನ್ನು ವಿಶ್ವಾಸದಿಂದ ನಂಬಿ, ದುಷ್ಟತನದಿಂದ ದೂರಾಗಿ, ಪ್ರಾರ್ಥನೆ, ಆರಾಧನೆ, ಬೈಬಲ್ ಓದುವಿಕೆ ಮತ್ತು ಇತರ ಕ್ರೈಸ್ತರೊಂದಿಗೆ ಸಮುದಾಯದಲ್ಲಿ ನಮ್ಮನ್ನು ತೊಡಗಿಸಿಕೊಂಡಾಗ, ನಮ್ಮೊಳಗಿನ ಕ್ರಿಸ್ತನ ಪವಿತ್ರಾತ್ಮವು ನಮ್ಮ ಆಸೆಗಳನ್ನು ಬದಲಾಯಿಸಲು ಪ್ರಾರಂಭಿಸುತ್ತದೆ ಮತ್ತು ಪಾಪ ಸ್ವಭಾವದಿಂದ ನಮಗೆ ಪ್ರಗತಿಶೀಲ ಮುಕ್ತಿಯನ್ನು ನೀಡುತ್ತದೆ.

ಬೆಳವಣಿಗೆ ಸಮಯ ತೆಗೆದುಕೊಳ್ಳುತ್ತದೆ. ಕಾರ್ಯಸಾಧನೆಯಲ್ಲಿ ಭರವಸೆ ಕಳೆದುಕೊಳ್ಳಬೇಡಿ. ಮತ್ತು ಬೆಳವಣಿಗೆಯ ನಿಧಾನಗತಿಯನ್ನು ಎಂದಿಗೂ ಬೆಳೆಯದೇ ಇರಲು ನೆಪವಾಗಿ ಬಳಸಬೇಡಿ.

ದೇವರನ್ನು ಗೌರವಿಸುವುದು ಈ ಜಗತ್ತಿನಲ್ಲಿ ಬೇರಾವುದೂ ತರದಂತಹ ಶಾಶ್ವತ ಸಂತೋಷ ಮತ್ತು ಶಾಂತಿಯನ್ನು ತರುತ್ತದೆ. ನಾವು ದುಷ್ಟತನದಿಂದ ದೂರಾಗುವುದು ಕೇವಲ ದುಷ್ಟತನದಿಂದ ಕೆಟ್ಟದ್ದು ಎಂಬ ಮಾತ್ರಕ್ಕಲ್ಲ; ನಾವು ದೇವರ ತೃಪ್ತಿಗಾಗಿ ದುಷ್ಟತನದಿಂದ ದೂರಾಗುತ್ತೇವೆ.

ಆತನ ಮಹಿಮೆಗಾಗಿ ಕೆಲಸಮಾಡುವುದರಲ್ಲಿ ಆತನೊಂದಿಗೆ ಸೇರಲು ದೇವರು ನಮ್ಮನ್ನು ಕರೆಯುತ್ತಾನೆ. ನಾವು ಅವನಿಗೆ ಶರಣಾದ ನಂತರ, ಈ ಸುಂದರವಾದ ಸ್ನೇಹವನ್ನು ಇತರರೊಂದಿಗೆ ಹಂಚಿಕೊಳ್ಳಲು ಆತನು ನಮ್ಮನ್ನು ಪ್ರೇರೇಪಿಸುತ್ತಾನೆ, ಇದನ್ನು ಶುಭಸಂದೇಶದ ಬೋಧನೆ ಎಂದು ಕರೆಯಲಾಗುತ್ತದೆ ಮತ್ತು ಅದನ್ನು ಹೇಗೆ ಅನುಭವಿಸಬೇಕೆಂದು ಅವರಿಗೆ ಕಲಿಸುತ್ತಾನೆ, ಇದನ್ನು ಶಿಷ್ಯತ್ವ ಎಂದು ಕರೆಯಲಾಗುತ್ತದೆ.

ಆತನು ನಮಗೆ ಕೊಡುವುದು ಎಷ್ಟು ಚೆನ್ನಾಗಿರುತ್ತದೆಂದರೆ, ನಾವು ಅದನ್ನು ಅನುಭವಿಸಿದಾಗ, ಆತನ ಬಗ್ಗೆ ಹಂಚಿಕೊಳ್ಳುವುದನ್ನು ತಡೆಯಲು ಆಗುವುದಿಲ್ಲ. ಒಮ್ಮೆ ರುಚಿ ನೋಡಿ ಭಗವಂತ ಒಳ್ಳೆಯವನೆಂದು ತಿಳಿದ ಮೇಲೆ, ನಮಗೆ ಸಿಕ್ಕಿದ ಸ್ವಾತಂತ್ರ್ಯ ಮತ್ತು ಸಂತೋಷವನ್ನು ಇತರರೂ ಅನುಭವಿಸಲಿ ಎಂದು ನಾವು ಸ್ವಾಭಾವಿಕವಾಗಿ ಬಯಸಿ ಎಲ್ಲವನ್ನೂ ಹಂಚಿಕೊಳ್ಳುತ್ತೇವೆ.

ಮತ್ತೊಮ್ಮೆ, ಒಳ್ಳೆಯ ಸುದ್ದಿ (ಅತ್ಯುತ್ತಮ ಸುದ್ದಿ!) ಇಲ್ಲಿದೆ: ನಾವು ದೇವರನ್ನು ಪ್ರೀತಿಯಿಂದ ನಂಬಿ ಪಾಲಿಸುವವರೆಗೂ ಆತನು ನಮ್ಮನ್ನು ಪ್ರೀತಿಸುವ ಮತ್ತು ಕ್ಷಮಿಸುವ ಭರವಸೆ ನೀಡುತ್ತಾನೆ, ನಮಗೆ ಚಿರ ಜೀವನವನ್ನು ನೀಡುತ್ತಾನೆ, ದುಷ್ಟತನದಿಂದ ಮುಕ್ತಿ ಮತ್ತು ಆತನೊಂದಿಗೆ ನಿಕಟ ಸ್ನೇಹವನ್ನು ನೀಡುತ್ತಾನೆ. ನಾವು ನಮ್ಮ ಜೀವನದ ಕೊನೆಯವರೆಗೂ ನಂಬಿಕಸ್ತರಾಗಿದ್ದರೆ, ಆತನೊಂದಿಗೆ ಶಾಶ್ವತವಾಗಿ ಬದುಕಲು, ದುಷ್ಟ ಬಯಕೆಗಳು, ಸಾವು ಮತ್ತು ದೋಷಗಳ ಶಾಪದಿಂದ ಸಂಪೂರ್ಣವಾಗಿ ಮುಕ್ತವಾಗಿರುವ ಹೊಸ ದೇಹವನ್ನು ನೀಡುವ ಭರವಸೆ ನೀಡುತ್ತಾನೆ.

ಕೆಟ್ಟ ಸುದ್ದಿ ಏನೆಂದರೆ, ದೇವರ ಕೊಡುಗೆಯನ್ನು ತಿರಸ್ಕರಿಸುವ ಪ್ರತಿಯೊಬ್ಬರೂ, ದುಷ್ಟತನದಿಂದಾಗಿ ತಾವು ಗಳಿಸಿದ ಅಂತ್ಯವಿಲ್ಲದ ಶಿಕ್ಷೆ ಮತ್ತು ದೇವರಿಂದ ಬೇರ್ಪಡಿಕೆಯನ್ನು ಅನುಭವಿಸುತ್ತಾರೆ.

ದೇವರ ಒಳ್ಳೆಯ ಸುದ್ದಿ ಮತ್ತು ನಾವು ಆತನನ್ನು ತಿರಸ್ಕರಿಸಿದಾಗ ಏನಾಗುತ್ತದೆ ಎಂಬ ಕೆಟ್ಟ ಸುದ್ದಿ ಶುಭಸಂದೇಶವನ್ನು ನಮ್ಮ ಜೀವನದ ಅತ್ಯಂತ ಪ್ರಮುಖ ಸತ್ಯವನ್ನಾಗಿಸುತ್ತದೆ.

ದೇವರ ಮಹಿಮೆಯನ್ನು ಹಾಡಲು ಮತ್ತು ಆತನನ್ನು ಶಾಶ್ವತವಾಗಿ ಆನಂದಿಸಲು ನಾವು ಅಸ್ತಿತ್ವದಲ್ಲಿರುವುದು. ನಮ್ಮನ್ನು ಸಂತೋಷಪಡಿಸುವ ಜೀವನ ಮತ್ತು ದೇವರನ್ನು ಸಂತೋಷಪಡಿಸುವ ಜೀವನದ ನಡುವೆ ನಾವು ಆರಿಸಿಕೊಳ್ಳಬೇಕೆಂದು ಎಂದು ನಾವು ಆಗಾಗ್ಗೆ ಯೋಚಿಸುತ್ತೇವೆ. ಆದರೆ ನಿಜವೇನೆಂದರೆ, ದುಷ್ಟ ಆಸೆಗಳಿಗೆ ಬಲಿಯಾಗುವುದು ಬಹಳ ಕಾಲ ನಮ್ಮನ್ನು ಸಂತೋಷಪಡಿಸುವುದಿಲ್ಲ. ದುಷ್ಟತನದಲ್ಲಿ ತೊಡಗುವುದು ಖಿನ್ನತೆಗೆ ಕಾರಣವಾಗುತ್ತದೆ, ಸುಳ್ಳು ಅಹಂಕಾರ ಮತ್ತು ವಿನಾಶಕಾರಿ, ದುಷ್ಟ ನಡವಳಿಕೆಗಳಿಗೆ ವ್ಯಸನಿಯಾಗುವಂತೆ ಮಾಡುತ್ತದೆ.ದುಷ್ಟತನ ನಮ್ಮನ್ನು ಆಳುತ್ತದೆ, ನಮ್ಮ ಸಂತೋಷವನ್ನು ಖಾಲಿಗೊಳಿಸುತ್ತದೆ ಮತ್ತು ನಮ್ಮನ್ನು ಖಾಲಿ ಮತ್ತು ಏಕಾಂಗಿಯಾಗಿ ಬಿಡುತ್ತದೆ. ಇದು ನಮ್ಮನ್ನು ಗುಲಾಮರನ್ನಾಗಿ ಮಾಡುತ್ತದೆ.

ದುಷ್ಟತನಕ್ಕೆ ಗುಲಾಮರಾಗುವ ಬದಲು ದೇವರ ಒಳ್ಳೆಯತನಕ್ಕೆ ಸ್ವಯಂಪ್ರೇರಿತ ಸೇವಕರಾಗಿ ನಮ್ಮನ್ನು ನಾವು ನೋಡಲು ಆರಿಸಿಕೊಂಡಾಗ, ನಮ್ಮ ಜೀವನದಲ್ಲಿ ದೇವರ ಉಪಸ್ಥಿತಿ ಮತ್ತು ಶುಭಸಂದೇಶದಲ್ಲಿ ಆತನು ನಮಗೆ ಭರವಸೆ ನೀಡಿದ ಮಹಾನ್ ಕೊಡುಗೆಗಳು ನಮಗೆ ಸಂತೋಷ ಮತ್ತು ಸ್ವಾತಂತ್ರ್ಯವನ್ನು ನೀಡುತ್ತವೆ, ಅವನ್ನು ಯಾವುದೂ ಕಸಿದುಕೊಳ್ಳಲು ಆಗುವುದಿಲ್ಲ.

ಅದಕ್ಕಾಗಿ ಎಲ್ಲವನ್ನೂ ತ್ಯಜಿಸಬೇಕು. ಆತನ ಕ್ಷಮೆ, ಜೀವನ ಮತ್ತು ಪ್ರೀತಿಯ ದಯೆ ಎಲ್ಲದರ ಬದಲಾಗಿ ನಮ್ಮ ಸಂಪೂರ್ಣ ಅವಿಧೇಯತೆ.

ಇದನ್ನು ನೆನಪಿಟ್ಟುಕೊಳ್ಳಲು ಸುಲಭ ಮಾರ್ಗವೆಂದರೆ ರಕ್ಷಣೆಯ ಕವಿತೆ:

ಕ್ರೂಜಿಸಲ್ಪಟ್ಟೆ ಯೇಸುವೆ
ಸಜೀವಿಯಾದೆ ನೀ ನನಗಾಗಿಯೇ
ನನ್ನೆಲ್ಲ ಪಾಪ ಮನ್ನಿಸು
ಸನ್ಮಿತ್ರನಾಗಿ ಬಾ ರಕ್ಷಕ
ನೂತನಪಡಿಸು ನನ್ನನು
ನಿನಗಾಗಿಬಾಳಲು ಸಹಾಯಿಸು

ಇನ್ನಷ್ಟು ತಿಳಿಯಿರಿ

ಯೋಹಾನ ಅಧ್ಯಾಯ 17 ಅನ್ನು ಓದಿ, ಇದು ಸಾಯುವ ಮೊದಲು ಯೇಸು ನಮಗಾಗಿ ಹಾಡಿದ ಪ್ರಾರ್ಥನೆಯ ದಾಖಲೆಯಾಗಿದೆ. ಯೇಸು ಹೇಳಿದ ವಿಷಯದಲ್ಲಿ ನಿಮಗೆ ಆಸಕ್ತಿಕರವೆನಿಸುವ ವಿವರಗಳನ್ನು ಬರೆಯಿರಿ, ನಂತರ ನಿಮ್ಮ ಪ್ರಶ್ನೆಗಳನ್ನು ಓದಿ ಮತ್ತು ಇನ್ನೊಬ್ಬ ಕ್ರೈಸ್ತನೊಂದಿಗೆ ಅದನ್ನು ಚರ್ಚಿಸಿ. ವೈಯಕ್ತಿಕ ಮಟ್ಟದಲ್ಲಿ ಯೇಸು ನಿಮಗಾಗಿ ಪ್ರಾರ್ಥಿಸುವ ಬಗ್ಗೆ ನಿಮ್ಮ ಅನಿಸಿಕೆ ಏನು?

ಹಿಂದಿನದು List List ಮುಂದಿನದು