Languages

ಪಾಠ 5

ನಾವು ದೇವರ ಕಡೆಗೆ ತಿರುಗಿದಾಗ ಮತ್ತು ದುಷ್ಟತನದಿಂದ ದೂರವಾದಾಗ, ಆತನು ನಮ್ಮ ಜೀವನವನ್ನು ಹೀರಿಕೊಳ್ಳಲು ಪ್ರಾರಂಭಿಸುತ್ತಾನೆ. ಆತನೇ ನಮ್ಮ ಜೀವವಾಗುತ್ತಾನೆ. ನಮ್ಮ ಸಂತೋಷವಾಗುತ್ತಾನೆ. ನಮ್ಮ ಜೀವನದ ದೃಷ್ಟಿಕೋನವನ್ನು ಬದಲಾಯಿಸುತ್ತಾನೆ. ಬೈಬಲ್ ಈ ಪ್ರಕ್ರಿಯೆಯನ್ನು ನಮ್ಮ ಮನಸ್ಸಿನ ನವೀಕರಣ ಎಂದು ಕರೆಯುತ್ತದೆ.

ಆತನನ್ನು ಮೂರು ವಿಭಿನ್ನ ಪಾತ್ರಗಳಲ್ಲಿ ಉಲ್ಲೇಖಿಸುವ ಮೂಲಕ ಈ ಬದಲಾವಣೆಯನ್ನು ಬೈಬಲ್ ಮೂರು ಪ್ರಾಥಮಿಕ ವಿಧಾನಗಳಲ್ಲಿ ವಿವರಿಸುತ್ತದೆ: ಸಂರಕ್ಷಕ, ಕರ್ತನು ಮತ್ತು ಸ್ನೇಹಿತ.

ಯೇಸು ಸಾಯುವ ಮೊದಲೂ ಮತ್ತು ನಂತರವೂ ಮಾನವನಾಗಿದ್ದನೆಂದು ನಮಗೆ ಬೈಬಲ್ ತುಂಬಾ ಜಾಗರೂಕತೆಯಿಂದ ತೋರಿಸುತ್ತದೆ. ಆತನು ತನ್ನ ಶಿಷ್ಯರನ್ನು ಮತ್ತು ತನ್ನನ್ನು ಪ್ರೀತಿಸುವ ಜನರನ್ನು "ಸ್ನೇಹಿತರು" ಎಂದು ಕರೆದನು.

ಯೇಸು ಸಾವಿನಿಂದ ಎದ್ದು ಬಂದ ನಂತರ, ಆತನನ್ನು ಕೊಂದ ಜನರಿಗೆ ಅವರು ಎಷ್ಟು ತಪ್ಪು ಮಾಡಿದ್ದಾರೆಂದು ತೋರಿಸಲಿಲ್ಲ. ಬದಲಿಗೆ, ಆತನು ತನ್ನ ಸ್ನೇಹಿತರಿಗೆ ಉಪಹಾರವನ್ನು ಮಾಡಿದನು, ನಂತರ ಅವರೊಂದಿಗೆ ನಡೆದಾಡಿದನು ಮತ್ತು ರಾತ್ರಿಯ ಊಟಕ್ಕೆ ಅವರ ಜೊತೆ ಸೇರಿಕೊಂಡನು. ಮತ್ತೊಂದು ನಿರೂಪಣೆಯಲ್ಲಿ, ಆತನು ಸ್ನೇಹಿತರ ಮನೆಗೆ ಭೇಟಿ ನೀಡಿದನು, ಅವರಿಗೆ ತನ್ನ ಗಾಯಗಳನ್ನು ತೋರಿಸಿದನು ಮತ್ತು ಅವರೊಂದಿಗೆ ಊಟ ಮಾಡಿದನು.

ಭೂಮಿಗೆ ಬರುವ ತನ್ನ ಪ್ರಾಥಮಿಕ ಉದ್ದೇಶವು ಸಂಬಂಧಗಳು ಎಂದು ತೋರಿಸಲು ಆತನು ಬಯಸಿದನು.

ಎಷ್ಟೇ ಆದರೂ ದೇವರು ನಮ್ಮನ್ನು ತನ್ನ ಸ್ನೇಹಿತರು ಎಂದು ಕರೆಯುತ್ತಾನೆ. ನಾವು ಆತನಿಗೆ ಸೇವೆ ಸಲ್ಲಿಸಿ ಪ್ರೀತಿಸುವಂತೆ ಆತನೂ ನಮಗೆ ಸೇವೆ ಸಲ್ಲಿಸುತ್ತಾನೆ ಮತ್ತು ಪ್ರೀತಿಸುತ್ತಾನೆ. ಆತನು ನಮ್ಮೊಳಗೆ ಅವಿನಾಭಾವ ಸ್ನೇಹದಲ್ಲಿ ವಾಸಿಸುತ್ತಾನೆ. ನಾವು ಪರಸ್ಪರ ಪ್ರೀತಿಸುತ್ತೇವೆ ಮತ್ತು ಗೌರವಿಸುತ್ತೇವೆ.

ನೀವು ಆತನನ್ನು ಪ್ರೀತಿಸಿದರೆ ಮತ್ತು ಆತನು ತನ್ನ ಬಗ್ಗೆ ಹೇಳಿಕೊಳ್ಳುವುದನ್ನು ನಂಬಿದರೆ, ನೀವು ನಿಮ್ಮ ಸ್ವಂತ ದುಷ್ಟತನದಿಂದ ದೂರವಾಗುತ್ತೀರಿ ಮತ್ತು ನಿಮ್ಮ ಜೀವನದಲ್ಲಿ ಆತನ ಪ್ರೀತಿ ಮತ್ತು ಶಕ್ತಿಯನ್ನು ಅನುಭವಿಸುತ್ತೀರಿ.

ಸಹಜವಾಗಿ, ನಾವು ಆತನ ಸ್ನೇಹವನ್ನು ಅನುಭವಿಸಬೇಕೆಂದರೆ, ಆತನು ನಮ್ಮನ್ನು ದುಷ್ಟತನದಿಂದ ಬಿಡಿಸಿ, ಆತನೇ ನಮ್ಮ ಜೀವನದ ಕೇಂದ್ರವಾಗಬೇಕು. ನಮ್ಮ ಸಂರಕ್ಷಕನಾಗಿ, ಆತನು ನಮ್ಮನ್ನು ನಿರಂತರವಾಗಿ ಕ್ಷಮಿಸುತ್ತಾನೆ ಮತ್ತು ನಮ್ಮನ್ನು ಮುಕ್ತಗೊಳಿಸುತ್ತಾನೆ. ನಾವು ಅದನ್ನು ಹಿಂದಿನ ಪಾಠಗಳಲ್ಲಿ ವಿವರಿಸಿದ್ದೇವೆ.

ಯೇಸು ನಮ್ಮ ಕರ್ತನು ಎಂಬುದರ ಅರ್ಥ ಏನು?

ಕರ್ತನು ಎಂದರೆ ಅಧಿಕಾರದಿಂದ ನಿರ್ದೇಶಿಸುವವನು. ಆತನು "ಹೀಗೆ ಮಾಡು" ಎಂದು ಆದೇಶಿಸುತ್ತಾನೆ ಮತ್ತು ಆತನ ಸೇವಕರು ಪಾಲಿಸುತ್ತಾರೆ. ಆತನು ನಮ್ಮ ಕರ್ತನಾಗಬೇಕೆಂದು ಆದೇಶಿಸುತ್ತಾನೆ ಎಂದು ಬೈಬಲ್ ಹೇಳುತ್ತದೆ. ಆತನೊಂದಿಗೆ ಸ್ನೇಹದಿಂದ ಬದುಕಲು ಇದು ಬಹಳ ಮುಖ್ಯವಾಗಿದೆ.

ಗೊಂದಲಕ್ಕೀಡಾಗಬೇಡಿ. ನಾವು ಕೋಪದಿಂದ ಆತನನ್ನು ಪಾಲಿಸಬೇಕೆಂದು ಆತನು ಬಯಸುವುದಿಲ್ಲ. ಹಲವಾರು ವರ್ಷಗಳಿಂದ, ಕೋಪದಿಂದಲೇ ಆತನನ್ನು ಪಾಲಿಸಿದ ಬಹಳಷ್ಟು ಜನರ ಮೇಲೆ ದೇವರು ಕೋಪಗೊಂಡಿದ್ದಾನೆ. ಬದಲಿಗೆ, ಜನರು ಆತನನ್ನು ಮೆಚ್ಚಿಸಲು ಆತನಿಗೆ ವಿಧೇಯರಾಗಬೇಕೆಂದು ದೇವರು ಬಯಸುತ್ತಾನೆ. ನಾವು ಆತನಿಗೆ ನಮ್ಮ ಜೀವನವನ್ನು ನಿಜವಾದ ಪ್ರೀತಿ ಮತ್ತು ವಿಶ್ವಾಸದಿಂದ ನೀಡಬೇಕೇ ಹೊರತು, ನಾವದನ್ನು ನೀಡಲೇಬೇಕೆಂಬ ಕಾರಣದಿಂದ ಅಲ್ಲ ಎಂದು ಆತನು ಬಯಸುತ್ತಾನೆ.

ನೀವು ಆತನಿಗೆ ವಿಧೇಯರಾಗಲು ಮತ್ತು ಆತನಿಗೆ ನಿಮ್ಮ ಜೀವನವನ್ನು ನೀಡಲು ಬಯಸದಿದ್ದರೆ, ಆತನ ಪದಗಳಲ್ಲಿ (ಬೈಬಲ್) ತಲ್ಲೀನರಾಗಿ ಮತ್ತು ಆತನು ಯಾರು, ಆತನು ನಿಮ್ಮನ್ನು ಯಾರೆಂದು ಹೇಳುತ್ತಾನೆ ಮತ್ತು ಆತನು ನಿಮಗಾಗಿ ಏನು ಮಾಡಿದ್ದಾನೆ ಎಂಬುದರ ಕುರಿತು ಯೋಚಿಸಿ. ನಂತರ, ಆತನಿಗಾಗಿ ನಿಮ್ಮ ಬಯಕೆಯನ್ನು ಸಕ್ರಿಯವಾಗಿ ಮುಂದುವರಿಸಿ.

ಯಾರದಾದರೂ ಬಗೆಗಿನ ನಿಮ್ಮ ಬಯಕೆಯನ್ನು ಹೇಗೆ ಮುಂದುವರೆಸಬೇಕು ಎಂಬುದಕ್ಕೆ ನಿಜ ಜೀವನದ ಉದಾಹರಣೆ ಇಲ್ಲಿದೆ. ಪ್ರೇಮಿಗಳು ಮದುವೆಯಾದಾಗ, ಅವರಿಗೆ ಯಾವಾಗಲೂ ಪರಸ್ಪರರ ಬಗ್ಗೆ ಭಾವನೆ ಇರುವುದಿಲ್ಲ. ಆದರೆ ಒಬ್ಬರನ್ನೊಬ್ಬರು ದಯೆಯಿಂದ ನಡೆಸಿಕೊಂಡಾಗ ಅವರಲ್ಲಿ ಪರಸ್ಪರ ಭಾವನೆಗಳು ಬೆಳೆಯುತ್ತವೆ.

ಒಬ್ಬ ಹೆಂಡತಿ ತನ್ನ ಪತಿಗೆ ಉಡುಗೊರೆಯನ್ನು ತರುತ್ತಾಳೆ ಮತ್ತು ಉಡುಗೊರೆಯನ್ನು ಕಲೆಹಾಕುವಾಗ, ಅವಳು ಅವನ ದಯೆಯನ್ನು ನೆನಪಿಸಿಕೊಳ್ಳುತ್ತಾಳೆ. ಉಡುಗೊರೆಯ ಬಗ್ಗೆ ಯೋಜಿಸುವುದು, ಅದನ್ನು ಖರೀದಿಸುವುದು ಮತ್ತು ಅದರಲ್ಲಿ ಪ್ರೇಮವಾಕ್ಯಗಳನ್ನು ಬರೆಯುವ ಸರಳ ಕೆಲಸವು ಅವಳಿಗೆ ಅವನ ಮೇಲಿನ ಭಾವನೆಯನ್ನು ಮುಂದುವರಿಸಲು ಸಹಾಯ ಮಾಡುತ್ತದೆ ಏಕೆಂದರೆ ಅವಳು ಅವನು ಯಾರೆಂಬುದನ್ನು ನೆನಪಿಸಿಕೊಳ್ಳುವಾಗ ಮತ್ತು ಅದಕ್ಕೆ ಪ್ರತಿಕ್ರಿಯಿಸುವಾಗ, ಅವಳ ಹೃದಯದಲ್ಲಿ ಭಾವನೆಗಳು ಹೆಚ್ಚಾಗುತ್ತವೆ ಮತ್ತು ಅವನ ಮೇಲಿನ ನಂಬಿಕೆಯ ಮೂಲಕ ಅವು ನಿಜವಾಗುತ್ತವೆ.

ಯೇಸು ಯಾರೆಂದು ನಾವು ನೆನಪಿಸಿಕೊಂಡಾಗ ಮತ್ತು ನಮ್ಮ ಕಡೆಗೆ ಆತನ ಒಳ್ಳೆಯತನದ ಬಗ್ಗೆ ಯೋಚಿಸಿದಾಗ, ನಮ್ಮ ಹೃದಯದಲ್ಲಿ ಭಾವನೆಗಳು ಹೆಚ್ಚಾಗುತ್ತವೆ ಮತ್ತು ನಿಜವಾಗುತ್ತವೆ. ಪ್ರತಿಕ್ರಿಯೆಯಾಗಿ, ಆತನು ನಮ್ಮ ಆಸೆಗಳನ್ನು ಬದಲಾಯಿಸುತ್ತಾನೆ ಮತ್ತು ಆತನು ಯಾರೆಂಬುದರ ಮೇಲಿನ ಪ್ರೀತಿ ಮತ್ತು ನಂಬಿಕೆಯಿಂದ ಆತನಿಗೆ ವಿಧೇಯರಾಗುವ ಶಕ್ತಿಯನ್ನು ಕೊಡುತ್ತಾನೆ.

ದೇವರ ವಾಗ್ದಾನಗಳು ನಮ್ಮ ಜೀವನದಲ್ಲಿ ನಿಜವಾಗಲು, ನಾವು ಆತನ ಪದಗಳನ್ನು ಓದುವ ಮೂಲಕ, ಪ್ರಾರ್ಥನೆಯ ಮೂಲಕ ಮತ್ತು ಆತನ ಆಜ್ಞೆಗಳನ್ನು ನಂಬುವ ಮತ್ತು ಪಾಲಿಸುವ ಮೂಲಕ ಆತನಿಗಾಗಿ ನಮ್ಮ ಪ್ರೀತಿಯನ್ನು ಮುಂದುವರೆಸಬೇಕು. ನಾವು ಆತನನ್ನು ನಮ್ಮ ರಕ್ಷಕ, ಕರ್ತನು ಮತ್ತು ಸ್ನೇಹಿತ ಎಂದು ಅಪೇಕ್ಷಿಸಲು ಪ್ರಾರಂಭಿಸಿದಾಗ ಇವೆಲ್ಲವೂ ನಮ್ಮ ಮನಸ್ಥಿತಿಯನ್ನು ಬದಲಾಯಿಸುತ್ತವೆ.

ಈ ಪ್ರಕ್ರಿಯೆಗಳು ಮುಖ್ಯವಾದುದು ಏಕೆಂದರೆ ನಾವು ಯಾರೆಂಬುದನ್ನು ಬದಲಾಯಿಸಲು ದೇವರು ಅವುಗಳನ್ನು ಬಳಸುತ್ತಾನೆ. ನಮ್ಮ ರಕ್ಷಕ, ಕರ್ತನು ಮತ್ತು ಸ್ನೇಹಿತನ ಗುರುತು ಹೊಂದಿರುವ ಆತನು ಆತನ ಮೇಲಿನ ನಮ್ಮ ನಂಬಿಕೆಯ ಮೂಲಕ ನಮ್ಮ ಗುರುತನ್ನು ಸುಧಾರಿಸುತ್ತಾನೆ.

ಇನ್ನಷ್ಟು ತಿಳಿಯಿರಿ

ಕೊಲೊಸ್ಸೆಯರಿಗೆ 1: 15-23 ಅನ್ನು ಓದಿ ಮತ್ತು ನೀವು ಯೇಸುವನ್ನು ಏಕೆ ಅನುಸರಿಸಲು ನಿರ್ಧರಿಸಿದ್ದೀರಿ ಮತ್ತು ಆತನನ್ನು ರಕ್ಷಕ, ಕರ್ತನು ಮತ್ತು ಸ್ನೇಹಿತ ಎಂದು ಕರೆಯಲು ನಿರ್ಧರಿಸಿದ್ದೀರಿ ಎಂದು ಕೇಳದ ನಿಮ್ಮ ಪ್ರೀತಿಪಾತ್ರ ಜನರ ಪಟ್ಟಿ ಮಾಡಿ. ದೇವರು ಅವರ ಹೃದಯಗಳನ್ನು ತೆರೆಯಲಿ ಮತ್ತು ಆತನು ನಿಮ್ಮ ಜೀವನವನ್ನು ಹೇಗೆ ಬದಲಾಯಿಸಿದ್ದಾನೆ ಎಂಬ ನಿಮ್ಮ ಕಥೆಯನ್ನು ಹಂಚಿಕೊಳ್ಳಲು ನಿಮಗೆ ಅವಕಾಶವನ್ನು ನೀಡಲಿ ಎಂದು ಪ್ರಾರ್ಥಿಸಿ. ಆತನು ನಿಮಗೆ ಅವಕಾಶಗಳನ್ನು ನೀಡುತ್ತಿದ್ದು, ನೀವು ಅವಗಳನ್ನು ಬಳಸುತ್ತಿಲ್ಲ ಎನಿಸುತ್ತಿದೆಯೇ?

ಹಿಂದಿನದು List List ಮುಂದಿನದು